ಕಲರವ

Posts Tagged ‘poem

– ರಂಜಿತ್ ಅಡಿಗ, ಕುಂದಾಪುರ.

ಒಮ್ಮೆಯಾದರೂ ಈ ಸಂಬಂಧಗಳಾಳಕ್ಕೆ
ಇಣುಕಲೇ ಬೇಕು

ಅದು ಈರುಳ್ಳಿ ಸಿಪ್ಪೆ ಸುಲಿದಂತೆ

ಮೊನ್ನೆಮೊನ್ನೆಯವರೆಗೂ ತನ್ನ
ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀನಿ ಅಂತ
ಒದ್ದೆ ಕಣ್ಣಾಲಿಗಳಿಂದ ಹೇಳಿದ ಗೆಳತಿ
4tmbಕಮ್ಮಿ ಮಾರ್ಕ್ಸು ಬಂದರೆ
ಮನೆಯಿಂದ ಓಡಿಸ್ತೀನಿ ಎಂದು
ಸಿಕ್ಕಾಪಟ್ಟೆ ಬೈದ ಅಪ್ಪ

ಕ್ಯಾಂಪಸ್ಸಿನಲ್ಲಿ ಕೆಲಸ
ಸಿಗಲಿಲ್ಲವೆಂದೊಮ್ಮೆ ಸುಮ್ಮನೆ
ಪರೀಕ್ಷೆ ಮಾಡಲು ಹೇಳಿದ ಕೂಡಲೇ
ಕೆಲಸ ಸಿಗದವನನ್ನು ಮದ್ವೆಯಾಗ್ತೀನಂತ
ಹ್ಯಾಗೆ ತನ್ನಪ್ಪನನ್ನು ಒಪ್ಪಿಸಬೇಕು
ನೀ ನನ್ನ ಮರೆಯಲೇಬೇಕು
ಎಂದು ತನ್ನ ಜೀವವನ್ನೇ ಕಡೆಗಣಿಸಿದಳಾಕೆ

ಮನೆಯನ್ನು ಒತ್ತೆಯಿಡೋಣ
ರಿಟಾಯರ್ಮೆಂಟ್ ಹಣವೂ ಬರಬಹುದು
ಸ್ವಂತ ಬಿಸಿನೆಸ್ಸು ಆರಂಭಿಸು ಮಗನೇ ಅನ್ನುವನು ಅಪ್ಪ

ಎರಡೂ ಮಾತಿಗೂ ಉಕ್ಕಿದ್ದು
ಕಣ್ಣೆದುರಿಗಿನ
ಪರದೆ ಜಾರಿಸೋ ಕಣ್ಣಿರೇ.

ಬೈಕಿಗೆ
ನೂರು ಅಶ್ವದ
ಉನ್ಮಾದ
ಒಳಗಿನ
ಚೈತನ್ಯಕ್ಕೆ
ದಿವ್ಯ
ಆಲಸ್ಯ

ಗೋಡೆಯ
ಗಡಿಯಾರದಲ್ಲಿ
ಮುಳ್ಳುಗಳ ದುಡಿಮೆ
ಕೈಗಳಿಗೆ
ಸಂಕೋಲೆಯಲ್ಲದ
ಬೇಡಿ

ದಿನ ಪತ್ರಿಕೆಗೆ
ಎಲ್ಲಾ ಗೊತ್ತೆಂಬ
ಉಡಾಫೆ
ಕಣ್ಣುಗಳಿಗೆ
ರೆಪ್ಪೆ ಬಡಿಯಲೂ
ನಿರಾಸಕ್ತಿ

ಅಡುಗೆ ಮನೆಗೆ
ಬೆಲೆವೆಣ್ಣಿನ
ವಯ್ಯಾರ
ಹೊಟ್ಟೆಗೆ
ಸದ್ದು ಮಾಡದ
ಎಚ್ಚರ

ಕಿಟಾರೆನ್ನುವ
ಬೀದಿಯಲ್ಲಿನ
ಆಟೋ
ಸುಮ್ಮನಿರು
ಮಗು ಮಲಗಿದೆ
ಎಂಬ ಉತ್ತರ

ಕಾಗದದ
ಎದೆಯಲ್ಲಿ
ಅಕ್ಷರದ ಸಂತೆ
ಕವಿಗೆ
ಏನೆಂದು
ಹೆಸರಿಡುವ ಚಿಂತೆ.

– ‘ಅಂತರ್ಮುಖಿ’


Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ