ನಾನು ನನ್ನ ಸಂಸಾರ!
Posted ಜುಲೈ 20, 2009
on:- In: ಹಾಸ್ಯ
- 6 Comments
ನಾನು ನನ್ನ ಸಂಸಾರ
———————–
ಭಾನುವಾರ ಬೆಳಿಗ್ಗೆ Breaking News ನ ಹುಡುಕಾಟದಲ್ಲಿ News Paper ಓದುತ್ತ Hall
ನಲ್ಲಿ ಕೂತಿದ್ದೆ . ಆದರೆ ಆ Breaking News ನಮ್ಮ ಮನೆಯಲ್ಲೇ ನಡೆಯುತ್ತದೆಂದು
ಕನಸಿನಲ್ಲೂ ಯೋಚಿಸಿರಲಿಲ್ಲ . “ರೀ … ಇವತ್ತು ಉಪ್ಪಿಟ್ಟು ಮಾಡುತ್ತೇನೆ … ಅಡುಗೆ
ಮನೆಯಿಂದ ನನ್ನವಳು ಉಲಿದಳು. ಎದೆ ಝಾಲ್ಲೆಂದಿತು!!!!! ತಕ್ಷಣ ಮೊಬೈಲ್ ಫೋನ್ ನ
Contact list ನಲ್ಲಿದ್ದ ಎಲ್ಲರಿಗೂ ಕರೆ ಮಾಡಿ ಮಾತಾಡಿದೆ . “ಏನೋ ….. ಬೆಳಿಗ್ಗೆ
ಬೆಳಿಗ್ಗೆ ಫೋನ್ ಮಾಡಿ ಬಿಟ್ಟಿದ್ದೀಯಾ !!!!! ಎಂದು ಎಲ್ರೂ ಕೇಳಿದ್ರು … ಹೌದು
ಮಧ್ಯಾನ್ನ ಹೇಗಿರ್ತೀನಿ ಅಂತ sure ಇಲ್ಲ ಅದಕ್ಕೆ ಈಗಲೇ ಮಾಡಿದೆ ಎಂದೆನು. ಕಳೆದ ಬಾರಿ
ನನ್ನವಳ “ಹಸ್ತಗುಣದ” ಬಲಿಪಶುವಾಗಿದ್ದ ರಮೇಶಣ್ಣ … ಲೋ Insurance Premium
ಕಟ್ಟಿದ್ದೀಯ ತಾನೇ ?? ಎಂದು ಕೇಳಿದ . ಹೌದು ಎಂದೆನು . ನನ್ನವಳು ಮನೆಯೊಳಗಿದ್ದರೆ
ನನಗೂ ಕೋಟಿ ರುಪಾಯಿ . ಆದರೆ ಅಡುಗೆ ಮನೆ ಹೊಕ್ಕರೆ ಸ್ವಲ್ಪ ಭಯವಾಗುವುದು ಸಹಜ .
ಒಹ್ ….. ಕ್ಷಮಿಸಿ ನನ್ನವಳ ಪರಿಚಯ ಮಾಡುವುದೇ ಮರೆತು ಹೋದೆ . ಇವಳ ಹೆಸರು ಶಾಂತಿ .
ದೇವರಾಣೆಗೂ ಇದು ಕೇವಲ ಅಂಕಿತನಾಮ . ನನ್ನ ಅತ್ತೆ ಮಾವಂದಿರ ಏಕೈಕ ಪುತ್ರಿ . ಅವರ
ಕುಟುಂಬದಲ್ಲಿ ಇವಳ ತಂದೆ ತಾಯಿ ಬಿಟ್ಟು ಬೇರೆ ಎಲ್ಲರಿಗೂ ಗಂಡು ಮಕ್ಕಳು. ಇದರಿಂದಾಗಿ
“ಪಾರ್ವತಿಯ ” ತರಹ ಇವಳು ಕೂಡ “ಮುದ್ದಿನ ಮನೆಮಗಳು “. ” ಆರತಿ ತೆಗೊಂಡರೆ ಗರ್ಮಿ
ತೀರ್ಥ ತೆಗೊಂಡರೆ ಶೀತ ” ಅಂತಾರಲ್ಲ ಅದೇ ಪಂಗಡಕ್ಕೆ ಸೇರಿದವಳು .ಕಬ್ಬು ತಿಂದರೆ
ಹಲ್ಲಿಗೆ ನೋವಾಗುತ್ತದೆಂದು Dry Fruits ತಿಂದೇ ಬೆಳೆದವಳು. ಕಲಿತಿದ್ದು
ಇಂಜಿನಿಯರಿಂಗ್ ಆದರೂ ಗಂಜಿ ನೀರು ಬೇಯಿಸಲಿಕ್ಕು ಬರುವುದಿಲ್ಲ . ಇವಳ ತಪ್ಪಿಲ್ಲ ಬಿಡಿ
. ಇವಳು ಅಡುಗೆ ಮನೆ ಕಡೆ ಬಂದರೂ “ನೀನು ಓದ್ಕೋ ಪುಟ್ಟಿ ” ಎಂದು ಹೇಳಿ ಹೊರಗೆ
ಕಳಿಸಿದರೆ ಏನು ಮಾಡುವುದು ?? ಈ ಪುಟ್ಟಿ ಹೆಸರಿನ ಹಸ್ತಾಂತರ ಇಂದಿಗೂ ಆಗಿಲ್ಲ . ಈಗ
ನಾವು ನಮ್ಮ ಮಗಳನ್ನು ಇವಳ ತವರು ಮನೆಗೆ ಕರೆದುಕೊಂಡು ಹೋದರೆ ಅವಳನ್ನು “ಪುಟ್ಟಿ ಮಗಳು
” ಎಂದು ಕರೆಯುತ್ತಾರೆ . ನೋಡುವವರಿಗೆ ನಾನೇನು ಇವಳನ್ನು ಬಾಲ್ಯವಿವಾಹ
ಮಾಡಿಕೊಂಡಿರುವಂತೆ ಅನಿಸುತ್ತದೆ .
ಹೌದ್ರಿ … ನಮ್ಮ ಮನೆಯಲ್ಲಿ ನಾನೇ ಅಡಿಗೆ ಮಾಡೋದು .. ಅರೆ !!! ಅದರಲ್ಲೇನು ನಾಚಿಕೆ
?? ನೀವು ರಾಮಾಯಣ ಮಹಾಭಾರತ ಓದಿದ್ದೀರ ತಾನೇ ?? ಅದರಲ್ಲಿ ನಳಪಾಕ , ಭೀಮಪಾಕದ ಉಲ್ಲೇಖ
ಬಿಟ್ಟರೆ “ದಮಯಂತಿ ಪಾಕ ” “ದ್ರೌಪದಿ ಪಾಕ” ದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ??
ಮತ್ತೆ ಅಜ್ಞಾತ ವಾಸದ ಕಾಲದಲ್ಲಿ ದ್ರೌಪದಿಯನ್ನು ಅಡುಗೆ ಕೆಲಸಕ್ಕೆ ಕಳಿಸಲು ತಯಾರಿ
ಮಾಡಿದ್ದರು ಆದರೆ ಅವಳು “ಏನ್ರಿ … ನಾನು ದುರ್ಯೋಧನ ಸಾಯೋವರ್ಗೂ Comb
ಮಾಡ್ಕೊಳ್ಳೋಲ್ಲ ಅಂತ ಶಪಥ ಮಾಡಿದ್ದೀನಿ ಆಮೇಲೆ ಸಾಂಬಾರಿನಲ್ಲಿ ಕೂದಲು ಬಂದ್ರೆ ಕಷ್ಟ
.. ನೀವೇ ಹೋಗಿ ಬನ್ರಿ .. ಎಂದು ಭೀಮನನ್ನು ಏಮಾರಿಸಿದಳು . ಆದರೆ ನನ್ನವಳು ಹಾಗಲ್ಲ
ನಾನೇ ಮಾಡುತ್ತೇನೆ ಎಂದು ಮುಂದೆ ಬಂದರೂ ನಾನು ಬಿಡುವುದಿಲ್ಲ . ನಮ್ಮ ಅಡುಗೆ ಕೋಣೆಯ
ಹೊಸ್ತಿಲಿನಲ್ಲಿ ಎರಡು ಲಕ್ಷ್ಮಣ ರೇಖೆ ಎಳೆದಿದ್ದೇನೆ ಒಂದು ಜಿರಳೆಗೆ ಮತ್ತೊಂದು ನನ್ನ
ಹೆಂಡತಿಗೆ .
ಮದುವೆಯಾದ ಹೊಸತರಲ್ಲಿ ಪರಸ್ಪರ impress ಮಾಡುವ ಕಾರ್ಯ ಭರದಿಂದ ನಡೆಯುವುದು ಸಾಮಾನ್ಯ
. ನಾನೂ ಹಾಗೇನೇ. ಆಗ ನಮ್ಮ ಮದುವೆಯಾಗಿ 2 ವಾರವಷ್ಟೇ ಕಳೆದಿತ್ತು . ಅಡುಗೆಯಲ್ಲಿ ಇವಳ
ಪರಾಕ್ರಮ ಅರಿತಿರಲಿಲ್ಲ . ಆಫೀಸಿಗೆ ಹೋಗುವ ಅವಸರದಲ್ಲಿದ್ದೆ . ರೀ breakfast
ಮಾಡ್ಕೊಂಡು ಹೋಗಿ ಅಂದಳು . ಸರಿ ಎಂದು ತಿಂದು impress ಮಾಡುವ ನಿಟ್ಟಿನಲ್ಲಿ “ಕಾಫಿ
ಚೆನ್ನಾಗಿದೆ ” ಎಂದೆನು . ” ನಾನು ಟೀ ಮಾಡಿದ್ದು” ಎಂದು ಹೇಳಿ ಮುಖ ಸಣ್ಣದು
ಮಾಡಿಕೊಂಡು ಒಳಗೆ ಹೋದಳು . ” ಸ್ವಲ್ಪ ಸಾವರಿಸಿಕೊಂಡು “ಹಹ್ಹಹ್ಹ … ತಮಾಷೆ
ಹೇಗಿತ್ತು ??? ಎಂದು ಕೇಳಿ ಮಾತಿನ ಓಘ ಬದಲಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ .
ಆಫೀಸಿನಿಂದ ಫೋನ್ ಮಾಡಿ ಹೀಗೆ ಮಾತಾಡುತ್ತಾ ” ನಾಳೆ ಏನು ಸ್ಪೆಷಲ್ ?? ಎಂದು ಕೇಳಿದೆ
. “ನೀವೇ ಹೇಳ್ರಿ ” ಎಂದಳು . ಇಡ್ಲಿ ಮಾಡು … ಬೇಳೆ ಸ್ವಲ್ಪ ಹೆಚ್ಚೇ ನೆನೆಸು ನಾಳೆ
ನನ್ನ ನಾಲ್ಕು ಗೆಳೆಯರು ಮನೆಗೆ ಬರುತ್ತಾರೆ ಎಂದೆನು . ಸಂಜೆ ಮನೆಗೆ ಹೋದವನಿಗೆ ತಲೆ
ತಿರುಗುವುದೊಂದು ಬಾಕಿ ನನ್ನ ಅರ್ಧಾಂಗಿ ಅರ್ಧ ಚೀಲ ತೊಗರಿಬೇಳೆ ನೆನೆಸಿ ಇಟ್ಟಿದ್ದಾಳೆ
. ನನ್ನ ನೋಡಿ “ರೀ … ಸಾಕಾ ಇಷ್ಟು ?? ಎಂದಳು . ಸಾಕಮ್ಮ ಸಾಕು ….. ನಮ್ಮ ಮದುವೆ
ದಿನ ಕೂಡ ಇಷ್ಟು ಬೇಳೆ ನೆನೆಸಿಟ್ಟಿರಲಿಕ್ಕಿಲ್ಲ ಎಂದೆನು .ಅತ್ತೆ ಮಾವ ಬರುವ ನೆಪ
ಮಾಡಿ ಗೆಳೆಯರ ಕಾರ್ಯಕ್ರಮವನ್ನು ಮುಂದೆ ಹಾಕಿದೆನು . ಆಮೇಲೆ ಒಂದು ವಾರ ಬೆಳಿಗ್ಗೆ
ತಿಂಡಿಗೆ “ದಾಲ್ ಖಿಚಡಿ ” ಊಟಕ್ಕೆ ಬೇಳೆಸಾರು .ಹೀಗೆ ದಾಲಿನ ಧಾಳಿಯಿಂದ ಹತ್ತು ದಿನ
ಹೊಟ್ಟೆಯಲ್ಲಿ ……. ಬೇಡ ಬಿಡಿ… ಅದನ್ನೆಲ್ಲಾ ಯಾಕೆ ಬರೆಯುವುದು …..ನಿಮಗೆ
ಅರ್ಥವಾಯಿತಲ್ಲ ಅಷ್ಟೆ ಸಾಕು .
ರಮೇಶಣ್ಣನ ಪ್ರಸಂಗ :- ರಮೇಶಣ್ಣ ನನ್ನ ಚಡ್ಡಿ ದೋಸ್ತಿ . ಸಂಬಂಧಿ ಕೂಡ ಸ್ನೇಹಿತ ಕೂಡ
. ನನಗಿಂತ 2 ವರ್ಷ ದೊಡ್ಡವನಾಗಿದ್ದರೂ ಸಣ್ಣ ಪ್ರಾಯದಿಂದ ನನ್ನ ಒಡನಾಡಿ . ಮದುವೆ ಆದ
ನಂತರ ಒಂದು ದಿನ ಅವನನ್ನು ಊಟಕ್ಕೆ ಕರೆದೆ . ಅವನಿಗೆ ನುಗ್ಗೆ ಕಾಯಿ ತುಂಬಾ ಇಷ್ಟ .
ಅದಕ್ಕೆ ನನ್ನಾಕೆಗೆ ನುಗ್ಗೆಕಾಯಿ ಹಾಕಿ ಸಾಂಬಾರು ಮಾಡಲು ಹೇಳಿದೆ . ಅವಳು ಮಾಡಿದಳು
.ರಮೇಶಣ್ಣ ತಿಂದವನೇ ..” ನುಗ್ಗೆಕಾಯಿಯನ್ನು ಯಾವ ಕಟ್ಟಿಗೆ ಡಿಪೋದಿಂದ ತಂದೆ ?? ಎಂದು
ಕೇಳಿದ . ಎಲ್ಲ ಬಲಿತಿರುವ ನುಗ್ಗೆಕಾಯಿಗಳು . ಇವಳನ್ನು ಕೇಳಿದರೆ “ರೀ ಮಾರ್ಕೆಟಿಗೆ
ಹೋಗಿದ್ದೆ ಆ ತರಕಾರಿ ಅಂಗಡಿಯವನು ಸಣ್ಣ ನುಗ್ಗೆಕಾಯಿ ಕೊಡಲು ಬಂದ ದಬಾಯಿಸಿ ದೊಡ್ಡ
ದೊಡ್ಡ ನುಗ್ಗೆ ಕಾಯಿ ಹಾಕಿಸಿಕೊಂಡು ಬಂದೆ ” ಅಂದಳು . ಅವಳ ಮುಖದ ಮೇಲೆ ದಿಗ್ವಿಜಯ
ಸಾಧಿಸಿದ ಸೇನಾಧಿಕಾರಿಯ ಸಂಭ್ರಮ . ನನಗೋ ಅಪ್ಪ ಹೇಳಿದ “ದೊಡ್ಡ ಪಾವಣೆ” ಕತೆ
ನೆನಪಾಯಿತು .ಇಷ್ಟ ಮಾತ್ರವಲ್ಲ …
ಚಪಾತಿ – ಉಂಡೆ -ಒಬ್ಬಟ್ಟಿನೊಟ್ಟಿಗೆ
ಬೇಕೇ ಬೇಕು ಚಾಕು ಕತ್ತರಿ ಸುತ್ತಿಗೆ ||
ಪೂರಿಯಲಿ ಅಡಗಿಹುದು ಎಣ್ಣೆಯಾ ಗಿರಣಿ
ಅಡುಗೆ ಮಾಡಿದರೆ ಇವಳು ಮಕ್ಕಳದು ಧರಣಿ.||
ಮಾಡಿದರೆ ಗೋಬಿ ಮಂಚೂರಿ
ಅಗ್ನಿಶಾಮಕ ದಳ ಪಕ್ಕದಲ್ಲಿದ್ದರೆ ಸರಿ
ಪನ್ನೀರು ತಿಂದರೆ ಕಣ್ಣೀರು
ಹೇಗೆ ?? ನನ್ನವಳ ದರ್ಬಾರು ??
ಸಾರಿನಲ್ಲಿ ಉಪ್ಪಿಲ್ಲ ಪಾಯಸದಿ ಬೆಲ್ಲ
ಬೇಳೆ ಸಾರಿನಲ್ಲಿ ಬೇಳೆ ಬೆಂದಿರುವುದಿಲ್ಲ||
ಪಲ್ಯದಲಿ ಅಡಗಿಹುದು ನೂರೆಂಟು ಸೊತ್ತು
ನನ್ನವಳ ಅಡುಗೆ ನನಗೆ ನುಂಗಲಾಗದ ತುತ್ತು ||
ಅಡುಗೆ ಮನೆಯಲ್ಲಿ ಮಾತ್ರ ಇವಳ ಕಾರ್ಯವ್ಯಾಪ್ತಿ ಮುಗಿಯೊಲ್ಲ . ಇವಳು ಮನೆಯಲ್ಲಿದ್ದರೆ
ಅಥವಾ ಪಾದಚಾರಿಯಾಗಿ ಹೊರಗೆ ಬಂದರೆ ಇಡೀ ಊರಿಗೆ ಶಾಂತಿ . ಆದರೆ ಅಪ್ಪಿ – ತಪ್ಪಿ ವಾಹನ
ಏರಿದರೆ ಈಕೆ ಪ್ರಳಯಾಂತಕಿ. ಊರಿನಲ್ಲಿ ಕರ್ಫ್ಯೂ ಜಾರಿ . ಹೆಸರೇನೋ ಸುಶಾಂತಿ .
ಇದನ್ನು “ಶಾಂತಿ ಅಶಾಂತಿಗಳ ಇರುವಿಕೆ ಯಾರ ಮೇಲೆ ಅವಲಂಬಿತವಾಗಿದೆಯೋ ಅವಳು”(ವಾಹನ
ಸಂಚಾರ ಸಮಾಸ ) ಎಂದು ಅರ್ಥೈಸಬಹುದು. ಊರಿನಲ್ಲಿನ ಎಲ್ಲ ಘಟಾನುಘಟಿಗಳು “ಜೀವ ಇದ್ರೆ
ಬೆಲ್ಲ ಬೇಡಿ ತಿಂಬೆ” ಎನ್ನುತ್ತಾ ಮನೆಯಲ್ಲಿ ಕೂರುವುದು ಸತ್ಯ .
ನೀವು ಉಡುಪಿಯಿಂದ ಭಟ್ಕಳಕ್ಕೆ ಹೋಗುತ್ತಿದ್ದೀರಾ ?? ಏನು ?? via ಕುಂದಾಪುರಾನಾ ???
ಬೇಡ …. ಈಗಲೇ ಎಚ್ಚರಿಸುತ್ತಿದ್ದೇನೆ . ನೋಡಿ ಸರ್ .. ಹಣ ಹೋದರೆ ನಾಳೆ
ಸಂಪಾದಿಸಬಹುದು .ಕೊಳಲಗಿರಿ -ಪೆರ್ಡೂರು-ಹೆಬ್ರಿ -ಶಿವಮೊಗ್ಗ -ಸಿದ್ದಾಪುರ -ಕೊಲ್ಲೂರು
– ಬೈಂದೂರು ಮಾರ್ಗದಿಂದ ಭಟ್ಕಳಕ್ಕೆ ಬನ್ನಿ . ಯಾಕೆ ಎಂದು ಕೇಳುತ್ತಿದ್ದೀರಾ ?? “
ಸುಶಾಂತಿ ಇದ್ದಾಳೆ ಎಚ್ಚರಿಕೆ ” ಏನು ?? ನಮ್ಮ ಬಳಿ license ಇದೆ ನಾವು ಹೀಗೆ
ಹೋಗುತ್ತೇವೆ ಅನ್ನುತ್ತೀರಾ ?? ಅವಳ ಬಳಿ ಇಲ್ಲಾ ಸ್ವಾಮೀ …
ಏನಿಲ್ಲ ಮೊನ್ನೆ ಇವಳು ದ್ವಿಚಕ್ರ ವಾಹನ ಕಲಿಯುವ ಹುಮ್ಮಸ್ಸಿನಲ್ಲಿ ನನ್ನ Honda
Activa ಏರಿದಳು ನೋಡಿ . ಇವಳು ಮೊದಲೇ ಎಲೆಕ್ಟ್ರಿಕಲ್ ಇಂಜಿನಿಯರ್ . ಅದೂ 85 %
ಅಂಕಗಳೊಂದಿಗೆ . ಕಲಿತ ವಿದ್ಯೆಯನ್ನೆಲ್ಲ ವಾಹನದ ಮೇಲೆ ಪ್ರಯೋಗ ಮಾಡಿದರೆ ಹೇಗೆ ನೋಡಿ
??ವಾಹನ ಹತ್ತಿದ ತಕ್ಷಣ ” When a tow wheeler is started and you twist the
acceleratore the fingers which encircle the accelarator will give the
direction of motion” ಎಂಬ ” THUMB RULE ” apply ಮಾಡಿಯೇ ಬಿಟ್ಟಳು . ಅಂದರೆ
ವಾಹನ ನಿಲ್ಲಿಸಲು accelarator ನ್ನು ಹಿಂದೆ ತಿರುಗಿಸಲು ಶುರು ಮಾಡಿದಳು . ಆ
ದ್ವಿಚಕ್ರ ವಾಹನಕ್ಕೆ ಈ ನಿಯಮ ಗೊತ್ತಿಲ್ಲದಿದ್ದರೆ ಅದು ಇವಳ ತಪ್ಪೇ ??
ದಿಕ್ಕಾಪಾಲಾಗಿ ಓಡಲು ಶುರು ಮಾಡಿತು . ಪುಣ್ಯಕ್ಕೆ ಮೈದಾನದಲ್ಲಿ ಬಿಡುತ್ತಿದ್ದಳು .
ಇಲ್ಲದಿದ್ದರೆ ಆ ದಿನ ಉಡುಪಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳು ” HOUSE-FULL ” ಬೋರ್ಡ್
ಹಾಕುತ್ತಿದ್ದವೋ ಏನೋ . !!!!!!!!!! ದೂರದಿಂದಲೇ ಇದನ್ನು ನೋಡಿದ ಊರ ಜನರು
ಮರುದಿನದಿಂದ ಇವಳು ಮನೆಯಿಂದ ಹೊರನಡೆದರೆ ನಡೆದುಕೊಂಡು ಹೋಗುತ್ತಿದ್ದಾಳೋ ಅಥವಾ
ವಾಹನದಲ್ಲೋ ಎಂದು ಮನೆಯ ಕಿಟಕಿಯಿಂದಲೇ confirm ಮಾಡಿಕೊಂಡು ಆಮೇಲೆ ಮನೆಯಿಂದ
ಹೊರಬೀಳುತ್ತಿದ್ದರು .
ಇನ್ನು ಇವಳು ಕಾರು ಕಲಿಯ ಹೊರಟಳು . ಆ ಡ್ರೈವಿಂಗ್ ಸ್ಕೂಲ್ ನ ತರಬೇತುದಾರ ನೋಡಿ ಮೇಡಂ
10 km speed –1st gear
20km speed –second gear
30 km speed — 3rd grear —– ಹೀಗೆ ಸರಳ ಲೆಕ್ಕಾಚಾರ ಹೇಳಿದ . ಅದೇ ಅವನು
ಮಾಡಿದ ತಪ್ಪು . ರಸ್ತೆ ನೋಡುವುದು ಬಿಟ್ಟು ಓಡೋ ಮೀಟರ್ ನೋಡುತ್ತಾ ಕುಳಿತಳು . ಮತ್ತೆ
ಇವಳು ಗಾಡಿ ಬಿಡುವಾಗ ಕಡಿಮೆ ಎಂದರೂ ಒಂದು ಮೂವರು assistants ಬೇಕು .
1) Pen – Paper ಹಿಡಿದುಕೊಂಡು ಗಾಡಿ ಯಾವ gear ನಲ್ಲಿದೆ ಮತ್ತು ಗಾಡಿಯ speed
ಎಷ್ಟು ಎಂದು ಲೆಕ್ಕ ಹಾಕಿ chaart Prepare ಮಾಡಿ ಹಿಂದಿನಿಂದ ಹೇಳಲು ಒಬ್ಬ .
2)ಅವನ ಮಾತು ಕೇಳಿ ಈಕೆ gear change ಮಾಡುತ್ತಾಳಲ್ಲ ಆಗ ಸ್ಟೇರಿಂಗ್ ಹಿಡಿದುಕೊಳ್ಳಲು ಒಬ್ಬ .
3) ಗಾಡಿಯ ಮುಂದೆ ಚಲಿಸುತ್ತ ರೋಡ್ ಹಂಪ್, ಟರ್ನ್ ಪಾಯಿಂಟ್ ಎಲ್ಲಿ ಬರುತ್ತದೆ ಮುಂತಾದ
ವಿಷಯಗಳ ಲೇಟೆಸ್ಟ್ update ಕೊಡಲು ಇನ್ನೊಬ್ಬ .
ಮತ್ತೆ ಬಲಕ್ಕೆ ತಿರುಗುವಾಗ ಎಡಗಡೆಯ indicator ಹಾಕುವುದು horn ಎಂದು ವೈಪರ್ ಶುರು
ಮಾಡುವುದು ಇದೆಲ್ಲ ಕಾಮನ್ ಬಿಡಿ . ಮುಂದೆ RTO ದವರು license ಕೊಡುವ ಮೊದಲು
ಕುಂದಾಪುರದಲ್ಲಿ 2 ತಿಂಗಳು ಡ್ರೈವ್ ಮಾಡಿ ಬಂದಿರಬೇಕೆಂಬ ಕಂಡೀಷನ್ ಹಾಕಬಹುದು.
ಹೀಗೆ ಮನೆ-ಆಫೀಸು -ಅಡುಗೆ ಎಂದು ಸುಸ್ತಾಗುತ್ತೇನೆ . ಬಳಲಿ ಬೆಂಡಾಗಿ ಮನೆಗೆ ಮರಳಿದಾಗ
ಮನೆ ಬಾಗಿಲಿನಲ್ಲಿ ಗೋಣು ಉದ್ದ ಮಾಡಿಕೊಂಡ ನನ್ನವಳು ” ರೀ ನಿಮಗೋಸ್ಕರ ಕಾಯ್ತಾ
ಇದ್ದೆ… ಬೇಗ ಟೀ ಮಾಡ್ರಿ….. ಎಂದು ತುಟಿಯಂಚಿನಲ್ಲಿ ನಕ್ಕಾಗ ಆ ನಗುವಿನಲ್ಲಿ
ಸುಸ್ತೆಲ್ಲಾ ಮರೆತು ಹೋಗುತ್ತದೆ . ಏನೇ ಹೇಳಿ “ನನ್ನವಳು ನನ್ನೆದೆಯ ಹೊನ್ನಾಡನಾಳುವಳು
” . ಇದೇ ನಾನು ಮತ್ತು ನನ್ನ ಸಂಸಾರದ ಕತೆ———————-
– ಸುಮಂತ ಶ್ಯಾನುಭೋಗ್, ಮುಂಬೈ
ಭಾನುವಾರ ಬೆಳಿಗ್ಗೆ Breaking News ನ ಹುಡುಕಾಟದಲ್ಲಿ News Paper ಓದುತ್ತ Hall
ನಲ್ಲಿ ಕೂತಿದ್ದೆ . ಆದರೆ ಆ Breaking News ನಮ್ಮ ಮನೆಯಲ್ಲೇ ನಡೆಯುತ್ತದೆಂದು
ಕನಸಿನಲ್ಲೂ ಯೋಚಿಸಿರಲಿಲ್ಲ . “ರೀ … ಇವತ್ತು ಉಪ್ಪಿಟ್ಟು ಮಾಡುತ್ತೇನೆ … ಅಡುಗೆ
ಮನೆಯಿಂದ ನನ್ನವಳು ಉಲಿದಳು. ಎದೆ ಝಾಲ್ಲೆಂದಿತು!!!!! ತಕ್ಷಣ ಮೊಬೈಲ್ ಫೋನ್ ನ
Contact list ನಲ್ಲಿದ್ದ ಎಲ್ಲರಿಗೂ ಕರೆ ಮಾಡಿ ಮಾತಾಡಿದೆ . “ಏನೋ ….. ಬೆಳಿಗ್ಗೆ
ಬೆಳಿಗ್ಗೆ ಫೋನ್ ಮಾಡಿ ಬಿಟ್ಟಿದ್ದೀಯಾ !!!!! ಎಂದು ಎಲ್ರೂ ಕೇಳಿದ್ರು … ಹೌದು
ಮಧ್ಯಾನ್ನ ಹೇಗಿರ್ತೀನಿ ಅಂತ sure ಇಲ್ಲ ಅದಕ್ಕೆ ಈಗಲೇ ಮಾಡಿದೆ ಎಂದೆನು. ಕಳೆದ ಬಾರಿ
ನನ್ನವಳ “ಹಸ್ತಗುಣದ” ಬಲಿಪಶುವಾಗಿದ್ದ ರಮೇಶಣ್ಣ … ಲೋ Insurance Premium
ಕಟ್ಟಿದ್ದೀಯ ತಾನೇ ?? ಎಂದು ಕೇಳಿದ . ಹೌದು ಎಂದೆನು . ನನ್ನವಳು ಮನೆಯೊಳಗಿದ್ದರೆ
ನನಗೂ ಕೋಟಿ ರುಪಾಯಿ . ಆದರೆ ಅಡುಗೆ ಮನೆ ಹೊಕ್ಕರೆ ಸ್ವಲ್ಪ ಭಯವಾಗುವುದು ಸಹಜ .
ಒಹ್ ….. ಕ್ಷಮಿಸಿ ನನ್ನವಳ ಪರಿಚಯ ಮಾಡುವುದೇ ಮರೆತು ಹೋದೆ . ಇವಳ ಹೆಸರು ಶಾಂತಿ .
ದೇವರಾಣೆಗೂ ಇದು ಕೇವಲ ಅಂಕಿತನಾಮ . ನನ್ನ ಅತ್ತೆ ಮಾವಂದಿರ ಏಕೈಕ ಪುತ್ರಿ . ಅವರ
ಕುಟುಂಬದಲ್ಲಿ ಇವಳ ತಂದೆ ತಾಯಿ ಬಿಟ್ಟು ಬೇರೆ ಎಲ್ಲರಿಗೂ ಗಂಡು ಮಕ್ಕಳು. ಇದರಿಂದಾಗಿ
“ಪಾರ್ವತಿಯ ” ತರಹ ಇವಳು ಕೂಡ “ಮುದ್ದಿನ ಮನೆಮಗಳು “. ” ಆರತಿ ತೆಗೊಂಡರೆ ಗರ್ಮಿ
ತೀರ್ಥ ತೆಗೊಂಡರೆ ಶೀತ ” ಅಂತಾರಲ್ಲ ಅದೇ ಪಂಗಡಕ್ಕೆ ಸೇರಿದವಳು .ಕಬ್ಬು ತಿಂದರೆ
ಹಲ್ಲಿಗೆ ನೋವಾಗುತ್ತದೆಂದು Dry Fruits ತಿಂದೇ ಬೆಳೆದವಳು. ಕಲಿತಿದ್ದು
ಇಂಜಿನಿಯರಿಂಗ್ ಆದರೂ ಗಂಜಿ ನೀರು ಬೇಯಿಸಲಿಕ್ಕು ಬರುವುದಿಲ್ಲ . ಇವಳ ತಪ್ಪಿಲ್ಲ ಬಿಡಿ
. ಇವಳು ಅಡುಗೆ ಮನೆ ಕಡೆ ಬಂದರೂ “ನೀನು ಓದ್ಕೋ ಪುಟ್ಟಿ ” ಎಂದು ಹೇಳಿ ಹೊರಗೆ
ಕಳಿಸಿದರೆ ಏನು ಮಾಡುವುದು ?? ಈ ಪುಟ್ಟಿ ಹೆಸರಿನ ಹಸ್ತಾಂತರ ಇಂದಿಗೂ ಆಗಿಲ್ಲ . ಈಗ
ನಾವು ನಮ್ಮ ಮಗಳನ್ನು ಇವಳ ತವರು ಮನೆಗೆ ಕರೆದುಕೊಂಡು ಹೋದರೆ ಅವಳನ್ನು “ಪುಟ್ಟಿ ಮಗಳು
” ಎಂದು ಕರೆಯುತ್ತಾರೆ . ನೋಡುವವರಿಗೆ ನಾನೇನು ಇವಳನ್ನು ಬಾಲ್ಯವಿವಾಹ
ಮಾಡಿಕೊಂಡಿರುವಂತೆ ಅನಿಸುತ್ತದೆ .
ಹೌದ್ರಿ … ನಮ್ಮ ಮನೆಯಲ್ಲಿ ನಾನೇ ಅಡಿಗೆ ಮಾಡೋದು .. ಅರೆ !!! ಅದರಲ್ಲೇನು ನಾಚಿಕೆ
?? ನೀವು ರಾಮಾಯಣ ಮಹಾಭಾರತ ಓದಿದ್ದೀರ ತಾನೇ ?? ಅದರಲ್ಲಿ ನಳಪಾಕ , ಭೀಮಪಾಕದ ಉಲ್ಲೇಖ
ಬಿಟ್ಟರೆ “ದಮಯಂತಿ ಪಾಕ ” “ದ್ರೌಪದಿ ಪಾಕ” ದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ??
ಮತ್ತೆ ಅಜ್ಞಾತ ವಾಸದ ಕಾಲದಲ್ಲಿ ದ್ರೌಪದಿಯನ್ನು ಅಡುಗೆ ಕೆಲಸಕ್ಕೆ ಕಳಿಸಲು ತಯಾರಿ
ಮಾಡಿದ್ದರು ಆದರೆ ಅವಳು “ಏನ್ರಿ … ನಾನು ದುರ್ಯೋಧನ ಸಾಯೋವರ್ಗೂ Comb
ಮಾಡ್ಕೊಳ್ಳೋಲ್ಲ ಅಂತ ಶಪಥ ಮಾಡಿದ್ದೀನಿ ಆಮೇಲೆ ಸಾಂಬಾರಿನಲ್ಲಿ ಕೂದಲು ಬಂದ್ರೆ ಕಷ್ಟ
.. ನೀವೇ ಹೋಗಿ ಬನ್ರಿ .. ಎಂದು ಭೀಮನನ್ನು ಏಮಾರಿಸಿದಳು . ಆದರೆ ನನ್ನವಳು ಹಾಗಲ್ಲ
ನಾನೇ ಮಾಡುತ್ತೇನೆ ಎಂದು ಮುಂದೆ ಬಂದರೂ ನಾನು ಬಿಡುವುದಿಲ್ಲ . ನಮ್ಮ ಅಡುಗೆ ಕೋಣೆಯ
ಹೊಸ್ತಿಲಿನಲ್ಲಿ ಎರಡು ಲಕ್ಷ್ಮಣ ರೇಖೆ ಎಳೆದಿದ್ದೇನೆ ಒಂದು ಜಿರಳೆಗೆ ಮತ್ತೊಂದು ನನ್ನ
ಹೆಂಡತಿಗೆ .
ಮದುವೆಯಾದ ಹೊಸತರಲ್ಲಿ ಪರಸ್ಪರ impress ಮಾಡುವ ಕಾರ್ಯ ಭರದಿಂದ ನಡೆಯುವುದು ಸಾಮಾನ್ಯ
. ನಾನೂ ಹಾಗೇನೇ. ಆಗ ನಮ್ಮ ಮದುವೆಯಾಗಿ 2 ವಾರವಷ್ಟೇ ಕಳೆದಿತ್ತು . ಅಡುಗೆಯಲ್ಲಿ ಇವಳ
ಪರಾಕ್ರಮ ಅರಿತಿರಲಿಲ್ಲ . ಆಫೀಸಿಗೆ ಹೋಗುವ ಅವಸರದಲ್ಲಿದ್ದೆ . ರೀ breakfast
ಮಾಡ್ಕೊಂಡು ಹೋಗಿ ಅಂದಳು . ಸರಿ ಎಂದು ತಿಂದು impress ಮಾಡುವ ನಿಟ್ಟಿನಲ್ಲಿ “ಕಾಫಿ
ಚೆನ್ನಾಗಿದೆ ” ಎಂದೆನು . ” ನಾನು ಟೀ ಮಾಡಿದ್ದು” ಎಂದು ಹೇಳಿ ಮುಖ ಸಣ್ಣದು
ಮಾಡಿಕೊಂಡು ಒಳಗೆ ಹೋದಳು . ” ಸ್ವಲ್ಪ ಸಾವರಿಸಿಕೊಂಡು “ಹಹ್ಹಹ್ಹ … ತಮಾಷೆ
ಹೇಗಿತ್ತು ??? ಎಂದು ಕೇಳಿ ಮಾತಿನ ಓಘ ಬದಲಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ .
ಆಫೀಸಿನಿಂದ ಫೋನ್ ಮಾಡಿ ಹೀಗೆ ಮಾತಾಡುತ್ತಾ ” ನಾಳೆ ಏನು ಸ್ಪೆಷಲ್ ?? ಎಂದು ಕೇಳಿದೆ
. “ನೀವೇ ಹೇಳ್ರಿ ” ಎಂದಳು . ಇಡ್ಲಿ ಮಾಡು … ಬೇಳೆ ಸ್ವಲ್ಪ ಹೆಚ್ಚೇ ನೆನೆಸು ನಾಳೆ
ನನ್ನ ನಾಲ್ಕು ಗೆಳೆಯರು ಮನೆಗೆ ಬರುತ್ತಾರೆ ಎಂದೆನು . ಸಂಜೆ ಮನೆಗೆ ಹೋದವನಿಗೆ ತಲೆ
ತಿರುಗುವುದೊಂದು ಬಾಕಿ ನನ್ನ ಅರ್ಧಾಂಗಿ ಅರ್ಧ ಚೀಲ ತೊಗರಿಬೇಳೆ ನೆನೆಸಿ ಇಟ್ಟಿದ್ದಾಳೆ
. ನನ್ನ ನೋಡಿ “ರೀ … ಸಾಕಾ ಇಷ್ಟು ?? ಎಂದಳು . ಸಾಕಮ್ಮ ಸಾಕು ….. ನಮ್ಮ ಮದುವೆ
ದಿನ ಕೂಡ ಇಷ್ಟು ಬೇಳೆ ನೆನೆಸಿಟ್ಟಿರಲಿಕ್ಕಿಲ್ಲ ಎಂದೆನು .ಅತ್ತೆ ಮಾವ ಬರುವ ನೆಪ
ಮಾಡಿ ಗೆಳೆಯರ ಕಾರ್ಯಕ್ರಮವನ್ನು ಮುಂದೆ ಹಾಕಿದೆನು . ಆಮೇಲೆ ಒಂದು ವಾರ ಬೆಳಿಗ್ಗೆ
ತಿಂಡಿಗೆ “ದಾಲ್ ಖಿಚಡಿ ” ಊಟಕ್ಕೆ ಬೇಳೆಸಾರು .ಹೀಗೆ ದಾಲಿನ ಧಾಳಿಯಿಂದ ಹತ್ತು ದಿನ
ಹೊಟ್ಟೆಯಲ್ಲಿ ……. ಬೇಡ ಬಿಡಿ… ಅದನ್ನೆಲ್ಲಾ ಯಾಕೆ ಬರೆಯುವುದು …..ನಿಮಗೆ
ಅರ್ಥವಾಯಿತಲ್ಲ ಅಷ್ಟೆ ಸಾಕು .
ರಮೇಶಣ್ಣನ ಪ್ರಸಂಗ :- ರಮೇಶಣ್ಣ ನನ್ನ ಚಡ್ಡಿ ದೋಸ್ತಿ . ಸಂಬಂಧಿ ಕೂಡ ಸ್ನೇಹಿತ ಕೂಡ
. ನನಗಿಂತ 2 ವರ್ಷ ದೊಡ್ಡವನಾಗಿದ್ದರೂ ಸಣ್ಣ ಪ್ರಾಯದಿಂದ ನನ್ನ ಒಡನಾಡಿ . ಮದುವೆ ಆದ
ನಂತರ ಒಂದು ದಿನ ಅವನನ್ನು ಊಟಕ್ಕೆ ಕರೆದೆ . ಅವನಿಗೆ ನುಗ್ಗೆ ಕಾಯಿ ತುಂಬಾ ಇಷ್ಟ .
ಅದಕ್ಕೆ ನನ್ನಾಕೆಗೆ ನುಗ್ಗೆಕಾಯಿ ಹಾಕಿ ಸಾಂಬಾರು ಮಾಡಲು ಹೇಳಿದೆ . ಅವಳು ಮಾಡಿದಳು
.ರಮೇಶಣ್ಣ ತಿಂದವನೇ ..” ನುಗ್ಗೆಕಾಯಿಯನ್ನು ಯಾವ ಕಟ್ಟಿಗೆ ಡಿಪೋದಿಂದ ತಂದೆ ?? ಎಂದು
ಕೇಳಿದ . ಎಲ್ಲ ಬಲಿತಿರುವ ನುಗ್ಗೆಕಾಯಿಗಳು . ಇವಳನ್ನು ಕೇಳಿದರೆ “ರೀ ಮಾರ್ಕೆಟಿಗೆ
ಹೋಗಿದ್ದೆ ಆ ತರಕಾರಿ ಅಂಗಡಿಯವನು ಸಣ್ಣ ನುಗ್ಗೆಕಾಯಿ ಕೊಡಲು ಬಂದ ದಬಾಯಿಸಿ ದೊಡ್ಡ
ದೊಡ್ಡ ನುಗ್ಗೆ ಕಾಯಿ ಹಾಕಿಸಿಕೊಂಡು ಬಂದೆ ” ಅಂದಳು . ಅವಳ ಮುಖದ ಮೇಲೆ ದಿಗ್ವಿಜಯ
ಸಾಧಿಸಿದ ಸೇನಾಧಿಕಾರಿಯ ಸಂಭ್ರಮ . ನನಗೋ ಅಪ್ಪ ಹೇಳಿದ “ದೊಡ್ಡ ಪಾವಣೆ” ಕತೆ
ನೆನಪಾಯಿತು .ಇಷ್ಟ ಮಾತ್ರವಲ್ಲ …
ಚಪಾತಿ – ಉಂಡೆ -ಒಬ್ಬಟ್ಟಿನೊಟ್ಟಿಗೆ
ಬೇಕೇ ಬೇಕು ಚಾಕು ಕತ್ತರಿ ಸುತ್ತಿಗೆ ||
ಪೂರಿಯಲಿ ಅಡಗಿಹುದು ಎಣ್ಣೆಯಾ ಗಿರಣಿ
ಅಡುಗೆ ಮಾಡಿದರೆ ಇವಳು ಮಕ್ಕಳದು ಧರಣಿ.||
ಮಾಡಿದರೆ ಗೋಬಿ ಮಂಚೂರಿ
ಅಗ್ನಿಶಾಮಕ ದಳ ಪಕ್ಕದಲ್ಲಿದ್ದರೆ ಸರಿ
ಪನ್ನೀರು ತಿಂದರೆ ಕಣ್ಣೀರು
ಹೇಗೆ ?? ನನ್ನವಳ ದರ್ಬಾರು ??
ಸಾರಿನಲ್ಲಿ ಉಪ್ಪಿಲ್ಲ ಪಾಯಸದಿ ಬೆಲ್ಲ
ಬೇಳೆ ಸಾರಿನಲ್ಲಿ ಬೇಳೆ ಬೆಂದಿರುವುದಿಲ್ಲ||
ಪಲ್ಯದಲಿ ಅಡಗಿಹುದು ನೂರೆಂಟು ಸೊತ್ತು
ನನ್ನವಳ ಅಡುಗೆ ನನಗೆ ನುಂಗಲಾಗದ ತುತ್ತು ||
ಅಡುಗೆ ಮನೆಯಲ್ಲಿ ಮಾತ್ರ ಇವಳ ಕಾರ್ಯವ್ಯಾಪ್ತಿ ಮುಗಿಯೊಲ್ಲ . ಇವಳು ಮನೆಯಲ್ಲಿದ್ದರೆ
ಅಥವಾ ಪಾದಚಾರಿಯಾಗಿ ಹೊರಗೆ ಬಂದರೆ ಇಡೀ ಊರಿಗೆ ಶಾಂತಿ . ಆದರೆ ಅಪ್ಪಿ – ತಪ್ಪಿ ವಾಹನ
ಏರಿದರೆ ಈಕೆ ಪ್ರಳಯಾಂತಕಿ. ಊರಿನಲ್ಲಿ ಕರ್ಫ್ಯೂ ಜಾರಿ . ಹೆಸರೇನೋ ಸುಶಾಂತಿ .
ಇದನ್ನು “ಶಾಂತಿ ಅಶಾಂತಿಗಳ ಇರುವಿಕೆ ಯಾರ ಮೇಲೆ ಅವಲಂಬಿತವಾಗಿದೆಯೋ ಅವಳು”(ವಾಹನ
ಸಂಚಾರ ಸಮಾಸ ) ಎಂದು ಅರ್ಥೈಸಬಹುದು. ಊರಿನಲ್ಲಿನ ಎಲ್ಲ ಘಟಾನುಘಟಿಗಳು “ಜೀವ ಇದ್ರೆ
ಬೆಲ್ಲ ಬೇಡಿ ತಿಂಬೆ” ಎನ್ನುತ್ತಾ ಮನೆಯಲ್ಲಿ ಕೂರುವುದು ಸತ್ಯ .
ನೀವು ಉಡುಪಿಯಿಂದ ಭಟ್ಕಳಕ್ಕೆ ಹೋಗುತ್ತಿದ್ದೀರಾ ?? ಏನು ?? via ಕುಂದಾಪುರಾನಾ ???
ಬೇಡ …. ಈಗಲೇ ಎಚ್ಚರಿಸುತ್ತಿದ್ದೇನೆ . ನೋಡಿ ಸರ್ .. ಹಣ ಹೋದರೆ ನಾಳೆ
ಸಂಪಾದಿಸಬಹುದು .ಕೊಳಲಗಿರಿ -ಪೆರ್ಡೂರು-ಹೆಬ್ರಿ -ಶಿವಮೊಗ್ಗ -ಸಿದ್ದಾಪುರ -ಕೊಲ್ಲೂರು
– ಬೈಂದೂರು ಮಾರ್ಗದಿಂದ ಭಟ್ಕಳಕ್ಕೆ ಬನ್ನಿ . ಯಾಕೆ ಎಂದು ಕೇಳುತ್ತಿದ್ದೀರಾ ?? “
ಸುಶಾಂತಿ ಇದ್ದಾಳೆ ಎಚ್ಚರಿಕೆ ” ಏನು ?? ನಮ್ಮ ಬಳಿ license ಇದೆ ನಾವು ಹೀಗೆ
ಹೋಗುತ್ತೇವೆ ಅನ್ನುತ್ತೀರಾ ?? ಅವಳ ಬಳಿ ಇಲ್ಲಾ ಸ್ವಾಮೀ …
ಏನಿಲ್ಲ ಮೊನ್ನೆ ಇವಳು ದ್ವಿಚಕ್ರ ವಾಹನ ಕಲಿಯುವ ಹುಮ್ಮಸ್ಸಿನಲ್ಲಿ ನನ್ನ Honda
Activa ಏರಿದಳು ನೋಡಿ . ಇವಳು ಮೊದಲೇ ಎಲೆಕ್ಟ್ರಿಕಲ್ ಇಂಜಿನಿಯರ್ . ಅದೂ 85 %
ಅಂಕಗಳೊಂದಿಗೆ . ಕಲಿತ ವಿದ್ಯೆಯನ್ನೆಲ್ಲ ವಾಹನದ ಮೇಲೆ ಪ್ರಯೋಗ ಮಾಡಿದರೆ ಹೇಗೆ ನೋಡಿ
??ವಾಹನ ಹತ್ತಿದ ತಕ್ಷಣ ” When a tow wheeler is started and you twist the
acceleratore the fingers which encircle the accelarator will give the
direction of motion” ಎಂಬ ” THUMB RULE ” apply ಮಾಡಿಯೇ ಬಿಟ್ಟಳು . ಅಂದರೆ
ವಾಹನ ನಿಲ್ಲಿಸಲು accelarator ನ್ನು ಹಿಂದೆ ತಿರುಗಿಸಲು ಶುರು ಮಾಡಿದಳು . ಆ
ದ್ವಿಚಕ್ರ ವಾಹನಕ್ಕೆ ಈ ನಿಯಮ ಗೊತ್ತಿಲ್ಲದಿದ್ದರೆ ಅದು ಇವಳ ತಪ್ಪೇ ??
ದಿಕ್ಕಾಪಾಲಾಗಿ ಓಡಲು ಶುರು ಮಾಡಿತು . ಪುಣ್ಯಕ್ಕೆ ಮೈದಾನದಲ್ಲಿ ಬಿಡುತ್ತಿದ್ದಳು .
ಇಲ್ಲದಿದ್ದರೆ ಆ ದಿನ ಉಡುಪಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳು ” HOUSE-FULL ” ಬೋರ್ಡ್
ಹಾಕುತ್ತಿದ್ದವೋ ಏನೋ . !!!!!!!!!! ದೂರದಿಂದಲೇ ಇದನ್ನು ನೋಡಿದ ಊರ ಜನರು
ಮರುದಿನದಿಂದ ಇವಳು ಮನೆಯಿಂದ ಹೊರನಡೆದರೆ ನಡೆದುಕೊಂಡು ಹೋಗುತ್ತಿದ್ದಾಳೋ ಅಥವಾ
ವಾಹನದಲ್ಲೋ ಎಂದು ಮನೆಯ ಕಿಟಕಿಯಿಂದಲೇ confirm ಮಾಡಿಕೊಂಡು ಆಮೇಲೆ ಮನೆಯಿಂದ
ಹೊರಬೀಳುತ್ತಿದ್ದರು .
ಇನ್ನು ಇವಳು ಕಾರು ಕಲಿಯ ಹೊರಟಳು . ಆ ಡ್ರೈವಿಂಗ್ ಸ್ಕೂಲ್ ನ ತರಬೇತುದಾರ ನೋಡಿ ಮೇಡಂ
10 km speed –1st gear
20km speed –second gear
30 km speed — 3rd grear —– ಹೀಗೆ ಸರಳ ಲೆಕ್ಕಾಚಾರ ಹೇಳಿದ . ಅದೇ ಅವನು
ಮಾಡಿದ ತಪ್ಪು . ರಸ್ತೆ ನೋಡುವುದು ಬಿಟ್ಟು ಓಡೋ ಮೀಟರ್ ನೋಡುತ್ತಾ ಕುಳಿತಳು . ಮತ್ತೆ
ಇವಳು ಗಾಡಿ ಬಿಡುವಾಗ ಕಡಿಮೆ ಎಂದರೂ ಒಂದು ಮೂವರು assistants ಬೇಕು .
1) Pen – Paper ಹಿಡಿದುಕೊಂಡು ಗಾಡಿ ಯಾವ gear ನಲ್ಲಿದೆ ಮತ್ತು ಗಾಡಿಯ speed
ಎಷ್ಟು ಎಂದು ಲೆಕ್ಕ ಹಾಕಿ chaart Prepare ಮಾಡಿ ಹಿಂದಿನಿಂದ ಹೇಳಲು ಒಬ್ಬ .
2)ಅವನ ಮಾತು ಕೇಳಿ ಈಕೆ gear change ಮಾಡುತ್ತಾಳಲ್ಲ ಆಗ ಸ್ಟೇರಿಂಗ್ ಹಿಡಿದುಕೊಳ್ಳಲು ಒಬ್ಬ .
3) ಗಾಡಿಯ ಮುಂದೆ ಚಲಿಸುತ್ತ ರೋಡ್ ಹಂಪ್, ಟರ್ನ್ ಪಾಯಿಂಟ್ ಎಲ್ಲಿ ಬರುತ್ತದೆ ಮುಂತಾದ
ವಿಷಯಗಳ ಲೇಟೆಸ್ಟ್ update ಕೊಡಲು ಇನ್ನೊಬ್ಬ .
ಮತ್ತೆ ಬಲಕ್ಕೆ ತಿರುಗುವಾಗ ಎಡಗಡೆಯ indicator ಹಾಕುವುದು horn ಎಂದು ವೈಪರ್ ಶುರು
ಮಾಡುವುದು ಇದೆಲ್ಲ ಕಾಮನ್ ಬಿಡಿ . ಮುಂದೆ RTO ದವರು license ಕೊಡುವ ಮೊದಲು
ಕುಂದಾಪುರದಲ್ಲಿ 2 ತಿಂಗಳು ಡ್ರೈವ್ ಮಾಡಿ ಬಂದಿರಬೇಕೆಂಬ ಕಂಡೀಷನ್ ಹಾಕಬಹುದು.
ಹೀಗೆ ಮನೆ-ಆಫೀಸು -ಅಡುಗೆ ಎಂದು ಸುಸ್ತಾಗುತ್ತೇನೆ . ಬಳಲಿ ಬೆಂಡಾಗಿ ಮನೆಗೆ ಮರಳಿದಾಗ
ಮನೆ ಬಾಗಿಲಿನಲ್ಲಿ ಗೋಣು ಉದ್ದ ಮಾಡಿಕೊಂಡ ನನ್ನವಳು ” ರೀ ನಿಮಗೋಸ್ಕರ ಕಾಯ್ತಾ
ಇದ್ದೆ… ಬೇಗ ಟೀ ಮಾಡ್ರಿ….. ಎಂದು ತುಟಿಯಂಚಿನಲ್ಲಿ ನಕ್ಕಾಗ ಆ ನಗುವಿನಲ್ಲಿ
ಸುಸ್ತೆಲ್ಲಾ ಮರೆತು ಹೋಗುತ್ತದೆ . ಏನೇ ಹೇಳಿ “ನನ್ನವಳು ನನ್ನೆದೆಯ ಹೊನ್ನಾಡನಾಳುವಳು
” . ಇದೇ ನಾನು ಮತ್ತು ನನ್ನ ಸಂಸಾರದ ಕತೆ
6 Responses to "ನಾನು ನನ್ನ ಸಂಸಾರ!"

sundara samsaara..!!!!!!!!!!!


nice presentation.


its very nice


So damn funny 🙂 nimma shaanti idanna Odi maneyalli kranti Agadiddare saaku


santhi nange sikidre ella eltinii aga edhe nimge dipavaliiiii:)

ಜುಲೈ 20, 2009 at 8:54 ಅಪರಾಹ್ನ
ಹಾಸ್ಯ ಲೇಖನ ತುಂಬ ಚೆನ್ನಗಿತು..