ಕಲರವ

Archive for December 2008

- ‘ಅಂತರ್ಮುಖಿ’

‘ಎಷ್ಟನೆ ಸಲದ ದಂಡ ಯಾತ್ರೆಯಪ್ಪಾ ಇದು?’ ಹಾಗಂತ ಕಾಫಿಗೆ ಕರೆಯುವ ಗೆಳೆಯರನ್ನು ರೇಗಿಸುತ್ತಿರುತ್ತೇನೆ. ಹಾಸ್ಟೆಲ್ಲಿನ ಹುಡುಗರು ಕಾಫಿಗೆ ಹೋಗುವ ಸಂಭ್ರಮವೇ ಬೇರೆ. ಬೆಳಿಗಿನ ಚಳಿಯಲ್ಲಿ ಧೈರ್ಯ ಮಾಡಿ ಎದ್ದವರು ಮಾಡಿಟ್ಟ ಕಾಫಿಯನ್ನು ತಮ್ಮ ಕೆಪಾಸಿಟಿಗೆ ತಕ್ಕಂತ ಹೀರಿಬಿಟ್ಟಿರುತ್ತರಾದ್ದರಿಂದ ನನ್ನಂಥ ಸೂರ್ಯದ್ವೇಷಿಗಳಿಗೆ, ಏಳು ಗಂಟೆಯ ಮೊದಲು ಎದ್ದು ಬಿಡುವುದು ನೈತಿಕ ಅಧಃಪಥನ ಎಂದು ಭಾವಿಸಿರುವವರಿಗೆ ಖಾಲಿ ಕಾಫಿ ಜಗ್ ಮಾತ್ರ ಕಾದಿರುತ್ತದೆ!
ಎಲ್ಲಾ ಹುಡುಗರು ಇದ್ದಾಗ ಹಾಸ್ಟೆಲ್ಲಿನ ವಾತಾವರಣ ಕಲಕಲ ಎನ್ನುತ್ತಿರುತ್ತದೆ. ಎಲ್ಲರಿಗೂ ಕಾಲೇ ಜು ರಜೆಯಿದ್ದರೆ, ಇಲ್ಲವೇ [...]

ದಿ ವರ್ಡಿಕ್ಟ್

Posted by: uniquesupri on: December 26, 2008

ಯೂಥ್ ಫೋಕಸ್: ಬಂಗಾರದ ಬಿಂದ್ರಾ
ಭಾರತದಲ್ಲಿ ಕ್ರೀಡೆಯೊಂದೇ ಅಲ್ಲ, ಯಾವ ವ್ಯವಸ್ಥೆಯೂ ಸರಿಯಿಲ್ಲ. ಇಂಥ ಪರಿಸ್ಥಿತಿಯಲ್ಲೂ ಪದಕ ಗೆದ್ದಿರುವ ಮೂವರಿಗೂ ನನ್ನ ಅಭಿನಂದನೆಗಳು.. – ಎಂ.ಜಿ.ಹರೀಶ್ (ಬ್ಲಾಗಿನಲ್ಲಿ ಬಂದದ್ದು)
ನಿಮ್ಮ ಪತ್ರಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. ನಿಮ್ಮ ಪತ್ರಿಕೆ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸುತ್ತೇನೆ. – ಗುರುಪ್ರಸಾದ್.ಎಸ್.ಹಟ್ಟಿಗೌಡರ್
ಇಂತಿ ನಿನ್ನ ಪ್ರೀತಿಯ: ಮೆಸೇಜು ಡಬ್ಬಿ ತೆಗೆದು ಕುಟ್ಟಿ ಕಳಿಸಿದ್ದು ಒಂದೇ ಸಾಲು
ಹಮ್.. ಚನ್ನಾಗಿದೆ.. ನಿಜ, ಮೊದಲ ಸಲದ ಪ್ರೀತಿಯಲ್ಲಿ ಇರೊ excitment, curosity, ಕನಸುಗಳು.. ವಿಶೇಷ.. ಚನ್ನಾಗಿ ಬರೀತೀರಿ. [...]

ನೆರಳು-ಬೆಳಕಿನ ನಡುವೆ

Posted by: uniquesupri on: December 26, 2008

- ಅಜಿತ ಚಂದ್ರ.ಎಸ್, ಬೆಂಗಳೂರು

ನಮ್ಮ ಬದುಕಿನ ಪಯಣ ಎಲ್ಲಿಗೆ?….. ಪ್ರಶ್ನೆ ವಿಚಿತ್ರ ಎನಿಸಿದರೆ ಅದು ಸಹಜ. ಆದರೆ ಆತ್ಮಾವಲೋಕನೆಗೆ ಕುಳಿತರೆ ಎಲ್ಲರ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದೇ ಎಂಬುದು ನನ್ನ ನಂಬಿಕೆ.
ಬದುಕು ಸಾಗುವ ಬಗೆಗೆ ಕುಳಿತು ಯೋಚಿಸಿದಾಗ ಎಲ್ಲರ ಮನಸ್ಸನ್ನು ಹೊಕ್ಕುವ ಯೋಚನೆ- ನನ್ನ ಬದುಕಿನ ಗುರಿ ಯಾವುದು?? ಅದರೆಡೆಗಿನ ಹಾದಿ ಎಷ್ಟು ಹಸನಾಗಿದೆ?? ಬದುಕಿನ ಪಯಣದ ಹಾದಿಯಲ್ಲಿ ಬಂದ ಸಂತಸದ ಆ ಮನತುಂಬಿದ ಸವಿಘಳಿಗೆಗಳು, ಅವುಗಳ ಸಿಹಿ ನೆನಪುಗಳು……. ಅಲ್ಲಲ್ಲಿ ಮನಸ್ಸನ್ನು ಕಲಕುವ, ಮರೆಯಲೇ [...]

ಮಚೆಂಪು ಕಾಲಂ – Exam Tension ಕಣ್ರೀ…

Posted by: uniquesupri on: December 25, 2008

- ಮಚೆಂಪು

ದೀಪಾವಳಿಯಲ್ಲಿ ಹಾಯಾಗಿ ಪಟಾಕಿಗೆ ಬೆಂಕಿ ಹಚ್ಚಿ ಕುಣಿದು ಕುಪ್ಪಳಿಸಿದ ನಂಗೆ ಮಾರನೆಯ ದಿನಾನೇ ತಲೇಮೇಲೆ ಬೆಂಕಿ ಇಟ್ರು ನಂ universityನವ್ರು. Exam dates unfortunately prepone ಆಗ್ಬಿಟ್ಟಿದೆ. ಕನ್ನಡಕವನ್ನು ತಿರುಗಿಸಿ, ಮುರುಗಿಸಿ, ಉಜ್ಜಿ, ಒರೆಸಿ ನೋಡಿದ್ರೂ ಅದೇ date. ಎಲ್ಲಾ unexpectedಉ. Full tensionಉ. ಏನ್ಮಾಡೋದು ಅನ್ನೋದೆ questionಉ.
ವರ್ಷದ beginning ನಿಂದ ಇಲ್ಲಿಯವರೆಗೆ ಆಗಿರೋ ಎಲ್ಲಾ portion Greek and Latin ಆಗಿಬಿಟ್ಟಿದೆ. Internalsನಲ್ಲಂತೂ ಹೆಂಗೋ ಆ ಕಡೆ, ಈ ಕಡೆ ತಲೆಯಾಡಿಸಿಕೊಂಡು, paperನಲ್ಲಿ [...]

- ‘ಅಂತರ್ಮುಖಿ’

ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ ಎಂದರೆ ಸಿನೆಮಾದಲ್ಲಿ ಅಕರಾಳ-ವಿಕಾರಾಳವಾಗಿ ಮುಖಭಾವ ಪ್ರಕಟಿಸುತ್ತಾ ಆಕ್ರಮಣ ಮಾಡುವ ಹತ್ತಾರು ಮಂದಿ ದಾಂಢಿಗರಿಗೆ ಒದೆ ಕೊಟ್ಟು ಗರಿ ಮುರಿಯದ ಶರ್ಟನ್ನೊಮ್ಮೆ ಕೊಡವಿ ನಿಂತು ಕೈ ಬೀಸುವ ಸಣಕಲ ಹೀರೋನ ಹಾಗೆ ಎಂಬ ಭ್ರಮೆಯನ್ನು [...]

- ‘ಯಶೋಧತನಯ’

ಓದುವುದಕ್ಕಾಗಿಯೋ, ಕೆಲಸ ಸಿಕ್ಕ ಕಾರಣಕ್ಕೋ ಮನೆಯಿಂದ ಹೊರಗೆ ಮನೆ ಮಾಡಲು ಹೊರಟಾಗ ಕಾಡುವ ಮನದ ವಿರಹಕ್ಕೆ, ಒಂದು ಜಾತಿಯ ಬಾಯಿತಿಗೆ ‘ಹೋಂ ಸಿಕ್‌ನೆಸ್’ ಅಂತ ಹೆಸರು. ಪ್ರತಿಯೊಬ್ಬರೂ ಬಾಳಿನ ಯಾವುದೋ ಘಟ್ಟದಲ್ಲಿ ಅನುಭವಿಸಬೇಕಾದ ತಹತಹವಿದು.
ಹುಟ್ಟಿದಾಗಿನಿಂದ ‘ಪರಾವಲಂಬಿ’ ಸಸ್ಯವನ್ನು ಮನದಲ್ಲಿ ಪೋಷಿಸುತ್ತಿರುವವರೇ ಎಲ್ಲರೂ. ಮಗುವಾಗಿದ್ದಾಗ ಆಹಾರದಿಂದ ಹಿಡಿದು ಎಲ್ಲ ಕೆಲಸಕ್ಕೂ ತಾಯಿಯ ಸಹಾಯಬೇಕು. ಬೆಳೆಯುತ್ತಾ ಹೋದಂತೆ ಸ್ವಲ್ಪ ಸ್ವಲ್ಪವಾಗಿ ತಮ್ಮ ಕೆಲಸ ತಾವೇ ಮಾಡುವಷ್ಟಕ್ಕೆ ಬಂದರೂ ಮಾನಸಿಕವಾಗಿ ಪರಿವಾರದೊಡನೆ ಅವಲಂಬಿತವಾಗಿರಲೇಬೇಕು. ತಾತ್ಕಾಲಿಕವಾಗಿ ಯಾವುದೇ ಕಾರಣಕ್ಕೆ ಮನೆ [...]

ಊರಿಗೆ ಹೊರಟು ನಿಂತ ಬಸ್ಸು

Posted by: uniquesupri on: December 23, 2008

- ಪಲ್ಲವಿ.ಎಸ್, ಧಾರವಾಡ

ಬೆಳ್ಳಂಬೆಳಿಗ್ಗೆ ಒಮ್ಮೊಮ್ಮೆ ಬಸ್‌ಸ್ಟ್ಯಾಂಡ್ ಕಡೆ ಸುಮ್ಮನೇ ಹೋಗುತ್ತೇನೆ.
ಚಳಿ ಅಲ್ಲೆಲ್ಲ ಮಡುಗಟ್ಟಿ ನಿಂತಿರುತ್ತದೆ. ಉಗಿಮಂಜಾಗಿ ತೇಲುತ್ತಿರುತ್ತದೆ. ಬಸ್‌ಸ್ಟ್ಯಾಂಡ್‌ನ ಸುತ್ತಮುತ್ತಲಿನ ಹೋಟೆಲುಗಳಲ್ಲಿ ನಿಜವಾದ ಬಿಸಿ ಉಗಿ ಚಹದ ಪಾತ್ರೆಯಿಂದ, ಇಡ್ಲಿ ಸ್ಟ್ಯಾಂಡ್‌ನಿಂದ, ಕಾಯ್ದ ಎಣ್ಣೆಯಿಂದ ಏಳುತ್ತಿರುತ್ತದೆ. ಇನ್ನೂ ಬಸ್ ಬಂದಿಲ್ಲ ಎಂದು ತಮ್ಮೊಳಗೇ ಪಿಸುಗುಟ್ಟುತ್ತ ಕೂತವರ ಬಾಯಿಂದಲೂ ಅದೇ ಬಿಸಿ ಉಗಿ.
ಅವರೆಲ್ಲ ಊರಿಗೆ ಹೊರಡಲು ಕಾಯ್ದವರು. ಮೊದಲ ಬಸ್ ಬಂದು ನಿಂತಿದೆಯಾದರೂ ಅದರೊಳಗೆ ಚಾಲಕನಿಲ್ಲ. ಕಂಡಕ್ಟರ್ ಜೊತೆಗೆ ಆತ ಅಲ್ಲೆಲ್ಲೋ ಚಹ ಕುಡಿಯುತ್ತಿರಬೇಕು. ತಣ್ಣಗಿರುವ [...]

-ರಂಜಿತ್ ಅಡಿಗ, ಕುಂದಾಪುರ

ಕಿಟಕಿಯಾಚೆ ಜೋರಾಗಿ ’ಗಣಪತಿ ಬಪ್ಪಾ ಮೊರ್ಯಾ’ ಕೇಳುತ್ತಿದೆ. ಅಸಹನೆಯಿಂದ ಕಿಟಕಿ ಮುಚ್ಚಿ ಕೂತರೆ, ಈ ಸಲ ಗೆಳೆಯರ್ಯಾರೂ ಹಬ್ಬಕ್ಕೆ ಮನೆಗೆ ಕರೆಯದೇ ಹೋದರಾ ಎಂಬ ಆಲೋಚನೆ. ಇಂಟರ್ನೆಟ್ಟು ತೆಗೆದರೆ ಸಾಕು ’ಹ್ಯಾಪಿ ಗಣೇಶ ಚತುರ್ಥಿ’ಯದೇ ರಗಳೆ. ಚುರುಗುಟ್ಟುವ ಹೊಟ್ಟೆ, ಆಗಷ್ಟೇ ಖಾಲಿಯಾದ ಅಡುಗೆ ಮನೆಯ ಡಬ್ಬಿಯನ್ನು ನೆನಪಿಸುತ್ತದೆ. ದರ್ಶಿನಿಯ ಹುಡುಗರೂ ತಮ್ಮ ಗುಂಪುಗಳಲ್ಲೇ ಹಬ್ಬ ಆಚರಿಸುತ್ತಿದ್ದಾರೆ. ಪಾತ್ರೆ ತೊಳೆಯುವ ಚಿಣ್ಣ ಇವತ್ತು ಕಾಲು ತುರಿಸಿಕೊಳ್ಳುವಂತಿಲ್ಲ. ಬಚ್ಚಲು ಮನೆಯ ಚೌಕಟ್ಟಿನಿಂದ ಹೊರಗೆ ಇಣುಕುತವೆ ಇಂದವನ ಕಣ್ಣುಗಳು. [...]

- ಅಂತರ್ಮುಖಿ

ನಮ್ಮ ಸಮಾಜದಲ್ಲಿ ನಾವಿಷ್ಟು ಗೌರವನ್ನು, ಪ್ರಾಮುಖ್ಯತೆಯನ್ನು ಕೊಡುತ್ತಿರುವ ಕುಟುಂಬ ವ್ಯವಸ್ಥೆ ಹುಟ್ಟಿಕೊಂಡಿದ್ದೇ ಸ್ವಾತಂತ್ರ್ಯದ, ಮುಕ್ತ ಅವಕಾಶದ ಬಯಕೆಯಿಂದಾಗಿ ಎನ್ನುತ್ತಾರೆ ಬುಡಕಟ್ಟುಗಳಲ್ಲಿ ಜೀವಿಸುತ್ತಿದ್ದ ಆದಿ ಮಾನವರ ಬದುಕನ್ನು ಅಧ್ಯಯನ ಮಾಡಿದವರು. ಒಂದು ಬುಡಕಟ್ಟಿನ ಪಂಗಡದಲ್ಲಿ ಒಬ್ಬ ಬಲಿಷ್ಠವಾದ ನಾಯಕನಿರುತ್ತಾನೆ. ಆತನೇ ಇಡೀ ಪಂಗಡದ ಆಗುಹೋಗುಗಳ ಮೇಲೆ ಹಕ್ಕುಳ್ಳವನಾಗಿರುತ್ತಾನೆ. ಆತನ ಸ್ಥಾನಮಾನ ಇಡೀ ಗುಂಪಿನಲ್ಲಿ ಶ್ರೇಷ್ಠವಾಗಿರುತ್ತದೆ. ಆ ಪಂಗಡದಲ್ಲಿನ ಸಮಸ್ತ ವೈಭೋಗ, ಸುಖ, ಸಂಪತ್ತು ಆತನ ಒಡೆತನದಲ್ಲಿರುತ್ತದೆ, ಗುಂಪಿನ ಎಲ್ಲಾ ಸುಂದರ ಹೆಣ್ಣುಗಳನ್ನು ಆತನೇ ಇಟ್ಟುಕೊಂಡಿರುತ್ತಾನೆ. ಆತನು ಬಳಸಿ [...]

ಝೆನ್ ಕಥೆಗಳು

Posted by: uniquesupri on: December 22, 2008

ಕತ್ತಿವರಸೆಯನ್ನು ಕಲಿಯುವುದರಲ್ಲಿ ಆಸಕ್ತನಾಗಿದ್ದ ಯುವಕನೊಬ್ಬ ಝೆನ್ ಗುರುವಿನ ಬಳಿಗೆ ಬಂದ.
"ನಾನು ನಿಮ್ಮ ಬಳಿ ಕತ್ತಿವರಸೆಯ ಕೌಶಲ ಕಲಿಯಬೇಕೆಂದಿದ್ದೇನೆ. ಪರಿಣತಿಯನ್ನು ಪಡೆಯಲು ಎಷ್ಟು ಕಾಲ ಬೇಕಾದೀತು?" ಎಂದು ಕೇಳಿದ.
ತೀರ ಸಹಜವೆಂಬಂತೆ ಗುರು "ಹತ್ತು ವರ್ಷ" ಎಂದ.
"ನನಗೆ ಬೇಗ ಕಲಿಯಬೇಕೆಂದು ಇಷ್ಟ. ಪ್ರತಿ ದಿನವೂ, ದಿನಕ್ಕೆ ಹದಿನೆಂಟು ಗಂಟೆಯ ಕಾಲ ಬೇಕಾದರೆ ಅಭ್ಯಾಸ ಮಾಡಬಲ್ಲೆ. ಹಾಗಾದರೆ ಎಷ್ಟು ಕಾಲ ಹಿಡಿದೀತು?" ಆತುರದಿಂದ ಯುವಕ ಕೇಳಿದ.
ಗುರು ಒಂದು ಕ್ಷಣ ಯೋಚನೆ ಮಾಡಿ "ಇಪ್ಪತ್ತು ವರ್ಷ" ಎಂದ.
………………………………………..
ಶಿಷ್ಯನೊಬ್ಬ ಗುರುವನ್ನು ಕೇಳಿದ: [...]


Blog Stats

  • 13,245 hits

 

December 2008
M T W T F S S
« Nov   Feb »
1234567
891011121314
15161718192021
22232425262728
293031