Posted by: uniquesupri on: November 20, 2008
- ಹೇಮಾ ಪವಾರ್, ಬೆಂಗಳೂರು
ಬೆಳಿಗ್ಗೆಯಿಂದ ಆ ಮುಖಾನೇ ಕಾಡ್ತಿದೆ. ಸಿಗ್ನಲ್ನಲ್ಲಿ ಸಿಂಬಳ ಸೋರುತ್ತಿರುವ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ ಆ ಹೆಣ್ಣಿನ ಮುಖ. ಅವಳನ್ನ ದಿನಾ ನೋಡ್ತಿದ್ದೆ, ಇವತ್ತು ಆ ಮುಖ ಪದೇ ಪದೇ ನೆನಪಾಗ್ಲಿಕ್ಕೆ ಕಾರಣ, ಪತ್ರಿಕೆಯಲ್ಲಿ ಈ ಸಿಗ್ನಲ್ ಭಿಕ್ಷುಕರ ಬಗ್ಗೆ ಓದಿದ್ದ ಲೇಖನ. ಅವರು ಮಕ್ಕಳನ್ನ ಭಿಕ್ಷೆ ಬೇಡೋಕೆ ಅಂತಾನೆ ದುಡ್ಡುಕೊಟ್ಟು ತರ್ತಾರಂತೆ!! ಒಮ್ಮೆ ಪೋಲೀಸರಿಗೆ ಸಿಕ್ಕಿಹಾಕಿಕೊಂಡ ಒಬ್ಬ ಭಿಕ್ಷುಕಿಯ ಸೆರಗಿನ ಗಂಟಲ್ಲಿ ಭರ್ತಿ ನಲವತ್ತು ಸಾವಿರ ಸಿಕ್ತಂತೆ!! ಇದೆಲ್ಲ ನಿಜವಾ? ಅವಳ [...]
Posted by: uniquesupri on: November 20, 2008
-ಅಂತರ್ಮುಖಿ
ನಾವು ಬುದ್ಧಿವಂತರು. ಸಮಗ್ರವಾಗಿ ಆಲೋಚಿಸದೆ, ಸರಿ ತಪ್ಪುಗಳ ನಿಷ್ಕರ್ಷೆಯನ್ನು ಮಾಡದೆ, ಉದ್ದೇಶಗಳನ್ನು ಸ್ಪಷ್ಟ ಪಡಿಸಿಕೊಳ್ಳದೆ, ಗುರಿಗಳನ್ನು ಕಂಡುಕೊಳ್ಳದೆ ನಾವು ಯಾವ ಕೆಲಸವನ್ನೂ ಮಾಡುವುದಿಲ್ಲ. ಏನನ್ನೇ ಮಾಡಬೇಕೆಂದರೂ ನಮಗೆ ಅದರಲ್ಲಿ ಒಂದು ಠಿuಡಿಠಿose ಇರಬೇಕು. ಉಪಯೋಗವಿಲ್ಲದ ಯಾವ ಕೆಲಸವನ್ನು ಮಾಡುವುದಕ್ಕೂ ನಾವು ಇಷ್ಟ ಪಡುವುದಿಲ್ಲ. ಉದ್ದೇಶವಿಲ್ಲದೆ ಮಾತನಾಡುವವರು, ಉದ್ದೇಶವಿಲ್ಲದೆ ಕೆಲಸ ಮಾಡುವವರು, ಆಕಾರವಿಲ್ಲದ ಚಿತ್ರದಲ್ಲಿ ಕುಂಚ ಅಲ್ಲಾಡಿಸುವವರು, ಏನನ್ನೂ ಹೇಳದ ಸಿನೆಮಾ ಮಾಡಿದವರು ನಮ್ಮಲ್ಲಿ ಲೂಸ್ಗಳು ಎಂದು ಗುರುತಿಸಲ್ಪಡುತ್ತಾರೆ. ಉದ್ದೇಶವಿಲ್ಲದೆ ನಗುತ್ತಾ ರಸ್ತೆಯಲ್ಲಿ ಸಾಗುವವನು ನಮ್ಮ ಅನುಕಂಪಕ್ಕೆ ತುತ್ತಾಗುತ್ತಾನೆ. [...]
Recent Comments