Posted by: uniquesupri on: September 30, 2008
The word laconic, meaning terse, pithy, expressing a meaning in few words, has an interesting origin that dates back to the Greek wars, more than 2600 years ago.
The people of Laconia, a state of ancient Greece, were famous for their valor and for their brevity of speech. They never used more words than were strictly [...]
Posted by: uniquesupri on: September 30, 2008
‘Citius’,’altius’ and ‘fortius’ says the Olympics motto, which means stronger, higher and faster and as the biggest sporting festival of the world unfolded at the ‘Bird’s Nest’, Beijing between 8th to 24th Aug the world just witnessed the physical and mental barriers being broken, records being stumbled and new ones being set. Citius, altius and [...]
Posted by: uniquesupri on: September 30, 2008
- ಹೇಮಾ ಪವಾರ್, ಬೆಂಗಳೂರು
“ಅಲ್ಲವೇ ನೋಡಿದ್ರೇನೆ ಗೊತ್ತಾಗುತ್ತೆ ಜೊಲ್ಲು ಅಂತ ಅದು ಹೇಗೆ ಮಾತಾಡ್ತೀಯಾ ಅವನ ಜೊತೆ ? ಅದೇನು ಅಷ್ಟೊಂದು ಹಲ್ಲು ಗಿಂಜತಾನೆ? irritate ಆಗಲ್ವಾ ನಿಂಗೆ?” ಅಂದೆ.
“ಯಾಕಾಗಬೇಕು? ” ತಣ್ಣಗೆ ಅಂದಳವಳು.
“He is a flirt !!” ತುಸು ಜೋರಾಗೇ ಅಂದೇ ನಾನು.
“ಛೇ! ನಿನಗೆ ಗೊತ್ತಿಲ್ವೇ ಅವ್ನು ಫ್ಲರ್ಟ್ ಅಲ್ಲ. ಅವ್ನಿಗೆ ಹುಡುಗಿಯರ ಶೋಕಿ ಇದೆ
ಅಷ್ಟೇ. ಫ್ಲರ್ಟ್ ಮಾಡೋ ಕ್ವಾಲಿಟೀಸ್ ಇಲ್ಲ!!!”
“ಫ್ಲರ್ಟ್ ಮಾಡೋಕೂ ಕ್ವಾಲಿಟೀಸ್ ಬೇಕಾ?” ಇಷ್ಟಗಲ [...]
Posted by: uniquesupri on: September 30, 2008
ಎಲ್ರಿಗೂ hi,
ಮುಂಚೆ ಕರೆಕ್ಟ್ ಒಂದು ತಿಂಗ್ಳಿಗೆ ಕೈಸೇರುತ್ತಿದ್ದ ‘ಸಡಗರ’ ಆಮೇಲಾಮೇಲೆ ಕುಂಟುತ್ತಾ, ತೆವಳುತ್ತಾ ಹೊರಬರತೊಡಗಿದಾಗ ನಮ್ ಎಡಿಟರ್ ಸಾಹೇಬ್ರು ‘ಸಡಗರ’ವನ್ನ ಎರಡು ತಿಂಗ್ಳಿಗೆ ಒಂದ್ಸಲ ಅಂತ ಮಾಡೋಣ ಅಂದ್ರು. ನಂಗಂತೂ ಭಯಂಕರ ಬೇಜಾರಾಗೋಗಿತ್ತು. ಯಾಕೆಂದ್ರೆ ತಿಂಗ್ಳಿಗೆ ಒಂದ್ಸರಿಯಾದ್ರೂ ನನ್ನ ಕಷ್ಟ ಸುಖಾನ ನಿಮ್ಮ ಜೊತೆ ಹಂಚ್ಕಂತಾ ಇದ್ದೆ. ಎರಡು ತಿಂಗ್ಳವರ್ಗೂ ಕಾಯ್ಬೇಕು ಅಂದ್ರೆ ಕಷ್ಟ ಆಗ್ತಿತ್ತು. ಆ ದೇವ್ರು ನಮ್ ಎಡಿಟರ್ಗೆ ಒಳ್ಳೆ ಬುದ್ಧಿ ಕೊಟ್ಟು ‘ಸಡಗರ’ ತಿಂಗ್ಳಿಗೆ ಒಂದ್ಸರಿ ಮಾಡೋ ಹಂಗೆ ಮಾಡಿದ್ದಾನೆ.
ಈ ಸಲ ಒಂದು [...]
Posted by: uniquesupri on: September 30, 2008
ಹಗಲು ಮಲಗಿತೆಂದರೆ ಸಾಕು
ಮಬ್ಬಿದಿರಿಸಿನಲಿ ಕುಣಿಯತೊಡಗುತವೆ ಕನಸುಗಳು
ಯಾರ ಒತ್ತಾಯಕ್ಕೊ ಸಿಕ್ಕು
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..
ಆಚಮನಕ್ಕೆ ತೆಗೆದಿರಿಸಿದ ಉದಕ
ಅಂಗೈಗೆ ಜಾರಿದೊಡೆ ಆವಿಯಾದುದಕೆ ಆಶ್ಚರ್ಯವಿಲ್ಲ
ನಾನು ಮಾತ್ರ ಕಾಣಬಲ್ಲೆ ವಡಬಾನಲ
ಅವಳೆಂದು ಕೊಂಡು ನೀಡಿದ ಅಂತರಂಗದ ಒಳಗೆ..
ಬದುಕು ಹಸನಾಗುವ ಬಯಕೆಗಳೆಲ್ಲ
ಆಣೆಗಳೊಡಗೂಡಿ ಭರವಸೆಗಳ ಜೋಡಿ ಮೆರೆದಿದ್ದವು
ಇಂದಿಗೂ ಒಬ್ಬಂಟಿಯಾಗಿ ಚರಿಸುತಿವೆ
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..
ಸುಧೆ ಸೂಸುವ ಹೂದೋಟದಲಿ
ಹಾಲಾಹಲವನೆರೆದು ಹಣ್ಣು ನೀಡೆಂದು ಹೇಳಬಹುದೆ?
ಒಲವೆಲ್ಲ ಉಡುಗಿ ಹೋದ ಮೇಲೆ ಉಳಿಯಿತೇನು..?
ಅವಳೆಂದು ನೀಡಿದ ಅಂತರಂಗದ ಒಳಗೆ…
-ಸಚಿನ್ ಕುಮಾರ ಬಿ.ಹಿರೇಮಠ
Posted by: uniquesupri on: September 28, 2008
ಈ ಸಂಚಿಕೆಯ ಡಿಬೇಟಿನ ವಿಷಯ ದೇಶಪ್ರೇಮಿ V/s ವಿಶ್ವಮಾನವ. ದೇಶಪ್ರೇಮ ವಿಶ್ವಮಾನವತೆಯನ್ನು ಹೊಂದಲು ಅಡ್ಡಿಯಾಗುತ್ತದೆಯೇ? ದೇಶಪ್ರೇಮವಿಲ್ಲದವ ವಿಶ್ವಮಾನವನಾಗಲು ಸಾಧ್ಯವಿಲ್ಲವೇ?
ದೇಶಪ್ರೇಮವಿಲ್ಲದವನು ಇಡೀ ವಿಶ್ವದ ಬಗ್ಗೆ ಅಭಿಮಾನವನ್ನು ಹೊಂದಲು ಸಾಧ್ಯವಿಲ್ಲ. ದೇಶದಲ್ಲಿನ ವೈವಿಧ್ಯತೆಯನ್ನು ಪ್ರೀತಿಸದವನು ಜಗತ್ತಿನ ಓರೆಕೋರೆಗಳನ್ನು ಸಮದೃಷ್ಠಿಯಿಂದ ಕಾಣಲಾರ ಎಂದು ವಾದಿಸಿದ್ದಾರೆ ಸುಪ್ರೀತ್.ಕೆ.ಎಸ್
ನಮ್ಮ ಆದರ್ಶಗಳು, ಕಲ್ಪನೆಗಳು ಎಷ್ಟೇ ಉದಾತ್ತವಾದರೂ ನಮ್ಮ ಹೃದಯ ಅಷ್ಟು ವಿಶಾಲವಾಗದೆ, ನಮ್ಮ ಗ್ರಹಿಕೆ ಅಷ್ಟು ಪಕ್ವವಾಗದೆ ಅವು ಯಥಾವತ್ತಾಗಿ ಅನುಷ್ಠಾನಕ್ಕೆ ಬರಲು ಸಾಧ್ಯವಾಗುವುದಿಲ್ಲ. ಸರೋವರದ ನೀರು ಎಷ್ಟೇ ಶುಭ್ರವಾದರೂ, ಎಷ್ಟೇ ಸವಿಯಾಗಿದ್ದರೂ ನಮ್ಮ ಪಾತ್ರೆ [...]
Posted by: uniquesupri on: September 28, 2008
ಈ ಸಂಚಿಕೆಯ ಡಿಬೇಟಿನ ವಿಷಯ ದೇಶಪ್ರೇಮಿ V/s ವಿಶ್ವಮಾನವ. ದೇಶಪ್ರೇಮ ವಿಶ್ವಮಾನವತೆಯನ್ನು ಹೊಂದಲು ಅಡ್ಡಿಯಾಗುತ್ತದೆಯೇ? ದೇಶಪ್ರೇಮವಿಲ್ಲದವ ವಿಶ್ವಮಾನವನಾಗಲು ಸಾಧ್ಯವಿಲ್ಲವೇ?
ದೇಶಪ್ರೇಮವೆಂಬುದು ಯುದ್ಧಗಳ ತಾಯಿ. ದೇಶಪ್ರೇಮದಿಂದ ವಿಶ್ವ ಭ್ರಾತೃತ್ವ ಅಸಾಧ್ಯವಾದ ಸಂಗತಿಯಾಗುತ್ತದೆ ಎಂದು ವಾದಿಸಿದ್ದಾರೆ ಚಂದ್ರಶೇಖರ್ ಪ್ರಸಾದ್.
ಇಬ್ಬರು ಮಕ್ಕಳು ಆಟವಾಡಲು ಅಂಗಳದಲ್ಲಿ ಕಲೆಯುತ್ತಾರೆ. ಅಲ್ಲೇ ಬಿದ್ದಿದ್ದ ಹತ್ತಾರು ಕಲ್ಲುಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಆಟದ ಓಘದಲ್ಲಿ ತಮ್ಮ ತಮ್ಮ ಕಲ್ಲುಗಳ ಮೇಲೆ ಹೆಮ್ಮೆ ಬೆಳೆಯುತ್ತದೆ. ತನ್ನದೇ ಕಲ್ಲುಗಳು ಶ್ರೇಷ್ಠ ಎಂದು ಇಬ್ಬರೂ ವಾದ ಮಾಡಲು ಶುರುಮಾಡುತ್ತಾರೆ. ಮೊದ ಮೊದಲು ಬಾಯಿಮಾತಿನಲ್ಲಿ ಶುರುವಾಗುವ [...]
Posted by: uniquesupri on: September 28, 2008
ವಿಲಿಯಂ ಜಿಲೆಟ್ ಹತ್ತೊಂಬತ್ತನೆ ಶತಮಾನದ ಅಮೇರಿಕನ್ ನಟ. ಒಮ್ಮೆ ನ್ಯೂಯಾರ್ಕಿನ ಥಿಯೇಟರೊಂದರಲ್ಲಿ ಆತ ಸಾಯುವ ಮನುಷ್ಯನ ಪಾತ್ರಧಾರಿಯಾಗಿದ್ದ. ನಾಟಕವನ್ನು ನೋಡಿದ ಮಾಲೀಕನಿಗೆ ಆತನ ನಟನೆ ಇಷ್ಟವಾಗಲಿಲ್ಲ.
ಆತ ಜಿಲೆಟ್ನನ್ನು ಕರೆಯಿಸಿ, “ಇವತ್ತಿನ ನಿನ್ನ ಶೋ ಕೆಟ್ಟದಾಗಿತ್ತು. ಆ ಸಾಯುವ ಸಂದರ್ಭದಲ್ಲಿ ಹೇಗೆ ನಟಿಸಬೇಕು… ನೀನು ನೋಡಿದ್ರೆ ನಗುತ್ತಿದ್ದೆಯಲ್ಲಾ?” ಎಂದು ಗದರಿದ.ಅದಕ್ಕೆ ಜಿಲೆಟ್, “ನೀವು ಕೊಡುವ ಸಂಬಳವನ್ನ ನೋಡಿದರೆ ನಾನು ನಗು ನಗುತ್ತಾ ಸಾಯುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯವಿರಲಿಲ್ಲ.”
…..
“ಗಾಳಿಯಲ್ಲಿ ಮಹಲು ಕಟ್ಟಬೇಡಿ” ಎಂಬುದೊಂದು ಹಳೆಯ ಬುದ್ಧಿ ಮಾತು. [...]
Posted by: uniquesupri on: September 27, 2008
- ನಗೆ ಸಾಮ್ರಾಟ್
ಗಣೇಶ ಚತುರ್ಥಿಯ ಹಬ್ಬದ ಸಂಭ್ರಮದಲ್ಲೇ ಬಿಡುವು ಮಾಡಿಕೊಂಡು ವಿನಾಯಕ ನಗೆ ನಗಾರಿಗಾಗಿ ಕೊಟ್ಟ ಎಕ್ಸ್ಕ್ಲೂಸಿವ್ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ನಗೆ ಸಾಮ್ರಾಟ್: ಗಜಮುಖ, ವಿನಾಯಕ, ಮೂಷಿಕವಾಹನನಿಗೆ ಶರಣು ಶರಣು.
ವಿನಾಯಕ: ನಮಸ್ಕಾರ ನಮಸ್ಕಾರ ನಮಸ್ಕಾರ!
ನ.ಸಾ: ಏನು ಲಾರ್ಡ್ ಇದು, ಸಿನೆಮಾ ಹೀರೋ ಗಣೇಶ್ ಸ್ಟೈಲಲ್ಲಿ ನಮಸ್ಕಾರ?
ವಿ: ಹೌದು, ಹೌದು ಈ ಭೂಲೋಕದವರಿಗೆ ಅವರದೇ ಧಾಟಿಯಲ್ಲಿ ಮಾತಾಡಿಸಬೇಕು. ಆಗಲೇ ಆಪ್ತತೆ ಬೆಳೆಯೋದು. ಈ ಸತ್ಯವನ್ನು ನಾನು ತುಂಬಾ ಹಿಂದೇ ಕಂಡುಕೊಂಡೆ ಆದ್ರೆ ನಮ್ಮ ಇತರ ದೇವರುಗಳಿಗೆ ಇದು [...]
Posted by: uniquesupri on: September 26, 2008
-ಆಕಾಂಕ್ಷ . ಬಿ
‘ಗಣಿತವೆಂಬುದು ಮೊದಲೇ ಉಕ್ಕಿನ ಕಡಲೆ ಇದ್ದ ಹಾಗೆ. ಅದರಲ್ಲೂ ಹುಡುಗಿಯರಿಗೆ ಗಣಿತ, ಲೆಕ್ಕ ಅಂದರೆ ಅಷ್ಟಕಷ್ಟೆ. ಅವರೆಷ್ಟೇ ಕಷ್ಟ ಪಟ್ಟರೂ ಲೆಕ್ಕ ಅವರಿಗೆ ದಕ್ಕದ ವಿಷಯ. ಇದಕ್ಕೆ ಬಯಾಲಜಿಕಲ್ ಕಾರಣಗಳು ಇವೆ. ಹುಡುಗಿಯರ ಮೆದುಳಿಗೇ ಗಣಿತದ ಬಗ್ಗೆ ಮುನಿಸಿದೆ. ಅವರದು ಭಾವ ಪ್ರಧಾನವಾದ ವ್ಯಕ್ತಿತ್ವ.’ ಎಂಬ ವಾದ ತುಂಬಾ ಹಿಂದಿನಿಂದಲೂ ಚಾಲ್ತಿಯಲ್ಲಿದೆ.
ಎಸ್ಸೆಸ್ಸೆಲ್ಸಿ, ಪಿಯುಸಿಯ ಪಬ್ಲಿಕ್ ಪರೀಕ್ಷೆಗಳಲ್ಲಿ ವರ್ಷ ವರ್ಷವೂ ಹುಡುಗಿಯರೇ ಮೇಲುಗೈ ಸಾಧಿಸಿ ವಿಜಯದ ನಗೆ ಬೀರುತ್ತಾ ಪತ್ರಿಕೆಗಳ ಮುಖಪುಟಗಳನ್ನು ಆಕ್ರಮಿಸಿಕೊಳ್ಳುತ್ತಿರುವರಾದರೂ ಹುಡುಗಿಯರಿಗಿಂತ ಹುಡುಗರೇ [...]
Recent Comments